ಲಕ್ಷಾಂತರ ಭಕ್ತರ ಜಯ ಘೋಷದೊಂದಿಗೆ ಜರುಗಿದ ಶಿವಯೋಗಮಂದಿರ ಮಹಾ ರಥೋತ್ಸವ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾದ ಶಿವಯೋಗಮಂದಿರದ ಮಹಾ ರಥೋತ್ಸವ ಯಶಸ್ವಿಯಾಗಿ ಜರುಗಿತು..!

ವೀರಶೈವ ಲಿಂಗಾಯತ ಪರಂಪರೆಗೆ ಮೂಲ ಕೇಂದ್ರ ಸ್ಥಾನವಾಗಿರುವ ಶಿವಯೋಗಮಂದಿರದ ನೂರಾರು ಜನ ಮಹಾ ಶರಣರು ಸೇರಿದಂತೆ ವಟುಗಳ ಸಮ್ಮುಖದಲ್ಲಿ ಜರುಗಿದ ರಥೋತ್ಸವಕ್ಕೆ ಭಕ್ತ ಸಮೂಹ ಉತ್ತತ್ತಿ ಮತ್ತು ಹಣ್ಣುಗಳ ಬದಲಾಗಿ ಹೂಗಳನ್ನು ಎಸೆದರು. ಪುರಾಣ ಮಹಾಮಂಗಲ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು..!!