ಪ್ರಿಯ ಓದುಗ ದೊರೆಗಳೇ..
ನಿಮ್ಮ ನೆಚ್ಚಿನ ‘ಕೃಷಿ ಪ್ರಿಯ’ ಪತ್ರಿಕೆಗೆ ಮಾರ್ಚ 10 ಕ್ಕೆ ಎರಡು ವರ್ಷ ತುಂಬಲಿದೆ. ಇಂತಹ ಅಮೃತ ಘಳಿಗೆಯನ್ನು ತಮ್ಮ ಜೊತಗೆ ಹಂಚಿಕೊಳ್ಳಲು ಸಂತಸವೆನಿಸುತ್ತದೆ. ತಾವು ನೀಡಿದ ಸಹಕಾರಕ್ಕೆ ನಮ್ಮ ಸಂಪಾದಕೀಯ ಬಳಗ ತುಂಬು ಹೃದಯದಿಂದ ಅಭಿನಂದಿಸುತ್ತದೆ. ಪತ್ರಿಕೆ ಲಕ್ಷಾಂತರ ಜನ ಓದುಗರನ್ನು ತಲುಪಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಇದಕ್ಕೆಲ್ಲಾ ಓದುಗ ದೊರೆಗಳಾದ ತಮ್ಮ ಪ್ರೋತ್ಸಾಹ ದೊಡ್ಡದು. ಎಂದಿನಂತೆ ವಿಭಿನ್ನ ಸುದ್ದಿಗಳನ್ನು ನೀಡುವ ಮೂಲಕ ಪತ್ರಿಕೆ ಇನ್ನೂ ನಾಡಿನ ಜನರ ಮನೆಮಾತಾಗಬೇಕಾಗಿದೆ. ಕಳೆದ ಎರಡು ವರ್ಷಗಳ ಕಾಲ ತಾವು ನೀಡಿದ ಸಹಕಾರ ಇನ್ನೂ ಮುಂದೆಯೂ ಅಗತ್ಯವೆಂದು ಭಿನ್ನಮಾಡಿಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ಪತ್ರಿಕೆ ಬೆಳವಣಿಗೆಗೆ ಜಾಹೀರಾತು ಸೇರಿದಂತೆ ವಿಭಿನ್ನ ಸುದ್ದಿಗಳನ್ನು ನೀಡಿ ಸಹಕರಿಸಬೇಕಾಗಿದೆ..!!
ಸಂಪಾದಕರು
ಶರಣಪ್ಪ ಕುಂಬಾರ