ಮಿಯ್ಯಾಪೂರ ಬಳಿ ಬಸ್ ಪಲ್ಟಿ; ಹಲವರಿಗೆ ಗಂಭೀರ ಗಾಯ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಡಿಪೋಗೆ ಸೇರಿದ ಸಾರಿಗೆ ಇಲಾಖೆಯ KA 57 F 4537 ಬಸ್ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪೂರ ಬಳಿ ಪಲ್ಟಿಯಾಗಿ ಪ್ರಯಾಣಿಕರಿಗೆ ಗಂಭಿರ ಗಾಯಗೊಂಡ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ತಾಲೂಕಿನ ದೋಟಿಹಾಳ ವ ದಕ್ಷಿಣ ಕನ್ನಡ ಮಂಗಳೂರು ಮಾರ್ಗದ ಬಸ್ ಇದಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ದೋಟಿಹಾಳ ದಿಂದ ಮೆಣಸಗೇರಿ, ಮಿಯ್ಯಾಪೂರ ಮೂಲಕ ಹನುಮಸಾಗರ ಕಡೆ ಹೊರಟಿದ್ದ ಬಸ್ ಮಿಯ್ಯಾಪೂರ ಹಳ್ಳದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ವಾಲಿ ಬಿದ್ದಿದೆ ಎಂದು ಹೇಳಲಾಗುತಿದ್ದು, ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಸುಮಾರು 35 ಜನ ಪ್ರಯಾಣಿಕರಲ್ಲಿ ಹಲವರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕುಷ್ಟಗಿ ಹಾಗೂ ಹನುಮಸಾಗರ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಸಧ್ಯ ಯಾರಿಗೂ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಕುಷ್ಟಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ರೆಫಾರ್ ಮಾಡಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಕೆಲ ಗಾಯಾಳುಗಳನ್ನು ಇಳಕಲ್, ಹನುಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಕುಷ್ಟಗಿ ಪೊಲೀಸರು ವಿಚಾರಣೆ ನಡೆಸುತಿದ್ದಾರೆ.

ಮಳೆಯ ಅಭಾವದ ಹಿನ್ನೆಲೆ ಉದ್ಯೋಗ ಅರಸಿ ಅಡವಿಭಾವಿ, ಕಡೇಕೊಪ್ಪ, ಮಿಯ್ಯಾಪೂರ, ದೋಟಿಹಾಳ ಭಾಗದಿಂದ ಮಂಗಳೂರು, ಗೋವಾ ಕಡೆಗೆ ಗುಳೆ ಹೊರಟಿರುವುದಾಗಿ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ತಿಳಿಸಿದ್ದಾರೆ.